ಶನಿವಾರ, ಜುಲೈ 5, 2014


Tuesday, February 8, 2011

ಸಿದ್ದಪ್ಪನವರ ಕಥೆ

ಸಿದ್ದಪ್ಪ ದೊಡ್ಡ ಬ್ಯುಸಿನೆಸ್ ಮನ್. ದಿನಾ ಸಿಕ್ಕಾಪಟ್ಟೆ ಕೆಲಸ, ಮನೆಗೆ ಬರೋದು ಮಧ್ಯರಾತ್ರಿ ಕಳೆದ ಮೇಲೆಯೇ. ಗಂಡ ದಿನಾ ಹುಚ್ಚಾಪಟ್ಟೆ ಕೆಲಸ ಮಾಡಿ ಸುಸ್ತಾಗಿ ಬರೋದು ನೋಡಿ ಹೆಂಡತಿಗೂ ಬೇಜಾರು. ಆದರೇನು ಮಾಡೋದು?, ದೊಡ್ಡ ಹುದ್ದೆಗೆ ಹೋದ ಮೇಲೆ, ಜವಾಬ್ದಾರಿಗಳೂ ಹೆಚ್ಚುತ್ತವೆಯಲ್ಲ?..

ಸಿದ್ದಪ್ಪನಿಗಿದ್ದ ಏಕೈಕ ಹವ್ಯಾಸ ಅಂದರೆ ಅಪರೂಪಕ್ಕೊಮ್ಮೆ ಗಾಲ್ಫ್ ಆಡೋಕೆ ಹೋಗೋದು. ಅದು ಅವನ ಹೆಂಡತಿಗೂ ಗೊತ್ತು. ಎಲ್ಲಾದರೂ ವೀಕೆಂಡುಗಳಲ್ಲು ಸಿದ್ದಪ್ಪನವರು ಗಾಲ್ಫ್ ಕಿಟ್ ತಗೊಂಡು ಹೊರಬಿದ್ದರೆ ಮತ್ತೆ ಬರೋದು ರಾತ್ರಿಗೇ. ಪಾಪ, ಗಂಡ ಕೆಲ ಬಾರಿ ಶನಿವಾರ ಭಾನುವಾರಗಳಲ್ಲೂ ತನ್ನ ಜೊತೆ ಇರಲ್ಲ ಎಂಬ ಬೇಜಾರು ಇದ್ದರೂ, ವಾರವಿಡೀ ಕೆಲಸ ಮಾಡಿರುತ್ತಾರೆ ಸುತ್ತಾಡಿಕೊಂಡು ಬರಲಿ ಅನ್ನೋದು ಪತಿವೃತಾ ಶಿರೋಮಣಿ ಪತ್ನಿಯ ಅಭಿಪ್ರಾಯ.

ಆದರೆ ಇತ್ತೀಚಿಗೆ ಕೆಲ ದಿನಗಳಿಂದ ಸಿದ್ದಪ್ಪನವರು ಗಾಲ್ಫ್ ಕಡೆಗೂ ತಲೆ ಹಾಕಿರಲಿಲ್ಲ. ದಿನಾ ರಾತ್ರಿ ಎರಡು ಗಂಟೆ ಮೇಲೆಯೇ ಆಗಮನ, ಮತ್ತೆ ಗೊರಕೆ. ಯಾಕೋ ಸಂಸಾರ ಜೀವನದ ಸಾರ ಗಂಡನ ಬೋರಲು ಬಿದ್ದ ಬೆನ್ನು ನೋಡಿಯೇ ಕಳೆದು ಹೋಗುತ್ತಿರುವುದನ್ನ ಅರಿತ ಪತ್ನಿ ಇದಕ್ಕೇನಾದರೂ ಪರಿಹಾರ ಹುಡುಕಬೇಕು ಅಂತ ನಿರ್ಧಾರ ಮಾಡಿದಳು.

ಅವಳ ಲೇಡೀಸು ಕ್ಲಬ್ಬಿನ ಮಿತ್ರೆಯೊಬ್ಬಳು, ನೋಡು ಗಂಡನ ಲೈಫನ್ನ ನೀನೇ ಸರಿ ಮಾಡಬೇಕು.. ಅವರಿಗೆ ಜೀವನದಲ್ಲಿ ಬೇರೇ ಲವಲವಿಕೆಯ ವಿಚಾರಗಳು ಇರುತ್ತವೆ ಅನ್ನೋದನೂ ತೋರಿಸಬೇಕು ಅಂದಳು ಮತ್ತು ಅದಕ್ಕೆ ಸರಿಯಾದ ಸಲಹೆಗಳನ್ನೂ ಕೊಟ್ಟಳು- ಸಿದ್ದಪ್ಪಾವ್ರನ್ನ ಮೊದಲು ಈ ಪಬ್ಬು ಗಿಬ್ಬಿಗೆ ಕರ್ಕೊಂಡು ಹೋಗು, ಅಲ್ಲೆಲ್ಲ ಹುಡುಗ್ರು - ಹುಡ್ಗೀರು ಅವರ ಕುಣಿತ-ಕುಡಿತ ಇದೆಲ್ಲ ನೋಡಿ ಅವರಿಗೊಂದು ಹುಮ್ಮಸ್ಸು ಬರಬೋದು, ಅವರಿಗೂ ಸ್ವಲ್ಪ ತಗೋಳೋ ಹಾಗೆ ಮಾಡು, ಮೊದಲಿಗೆ ಸ್ವಲ್ಪ ಕಷ್ಟ ಅನ್ನಿಸಿದ್ರೂ ಆಮೇಲಾಮೇಲೆ ಅಭ್ಯಾಸ ಆಗತ್ತೆ ಅಂತ.

ಜೈ ತಗಳಪ, ಸಿದ್ದಪ್ಪನವರು ಈ ಶುಕ್ರವಾರ ಮನೆಗೆ ಬರೋದನ್ನೇ ಕಾಯ್ತಿದ್ದ ವೈಫು, ಲಕಲಕ ಡ್ರೆಸ್ಸು ಮಾಡಿಕೊಂಡಿದ್ದಳು. ಸಿದ್ದಪ್ಪಾವರು ಏನಿದು ವಿಚಾರ ಅಂತ ಕೇಳೋಕೆ ಮುನ್ನವೇ, ಅವರ ಟೈ ಕಿತ್ತು ಹಾಕಿ ಎಳಕೊಂಡು ಹೊರಟೇ ಬಿಟ್ಟಳು. ದಾರಿಯಲಿ ಸಿಕ್ಕಿದ ಯಾವುದೋ ಕ್ಯಾಬು ಹತ್ತಿ ಮೊದಲೇ ತಿಳಕೊಂಡಿದ್ದ ನಗರದ ಉತ್ತಮ ಪಬ್ಬೊಂದರ ಹೆಸರನ್ನ ಡ್ರೈವರಿಗೆ ವದರಿದಳು. ಅದನ್ನ ಕೇಳಿದ್ದೇ ಸಿದ್ದಪ್ಪನವರು ಆಘಾತಕ್ಕೊಳಗಾಗಿ ಎಲ್ಲಿಗೆ ಹೊರಟಿದ್ದೇವೆ ಎಂದು ಕೇಳಿದಾಗ , ಹೀಗೀಗೆ, ಸುಮ್ಮನೇ ರಿಲ್ಯಾಕ್ಸ್ ಆಗೋಕೆ.. ಅಂತೆಲ್ಲ ಶಾರ್ಟ್ ಅಂಡ್ ಸ್ವೀಟ್ ಆಗಿ ವಿಚಾರ ತಿಳಿಸಿ ಸುಮ್ಮನಾದಳು. ಪಕ್ಕದಲ್ಲಿ ಕೂತಿದ್ದ ಸಿದ್ದಪ್ಪನವರು ಸಿಕ್ಕಾಪಟ್ಟೆ ಕೊಸರಾಡುತ್ತಿದ್ದರೂ, ಅಸಮಾಧಾನದಲ್ಲಿ ಗೊಣಗಾಡುತ್ತಿದ್ದರೂ ಈಕೆ ಕ್ಯಾರೇ ಅನ್ನಲಿಲ್ಲ.

ಝಗಮಗ ಮಿಂಚುತ್ತಿದ್ದ ಪಬ್ಬಿನ ಹೊರಗೆ ನಿಂತ ಸಿದ್ದಪ್ಪನವರು ಅಲ್ಲಿಂದ ವಾಪಾಸು ಹೋಗೋಕೆ ಹವಣಿಸುತ್ತಿದ್ದಾಗಲೇ ಅವರ ಧರ್ಮಪತ್ನಿ ಅವರನ್ನು ಒಳಗೆಳೆದುಕೊಂಡು ಹೊರಟೇ ಬಿಟ್ಟಳು, ಹೊಸ ಕನಸುಗಳ ಲೋಕ ತೆರೆದೇ ಬಿಟ್ಟಿದೆ ಎಂಬ ಆಸೆಯಲ್ಲಿ. ಅಷ್ಟರಲ್ಲಿ ಒಂದು ಅಚ್ಚರಿ ಸಂಭವಿಸಿತು.ಬಾಗಿಲಲ್ಲೇ ಇದ್ದ ದಪ್ಪ ಮೀಸೆಯ ಟೊಪ್ಪಿವಾಲ ಸಿದ್ದಪ್ಪರನ್ನ ನೋಡಿ, ಟಪ್ ಅಂತ ಕಾಲೆತ್ತಿ ಸೆಲ್ಯೂಟ್ ಹೊಡೆದು, ವೆಲ್ಕಂ ಸಿದ್ದಪ್ಪಾ ಸರ್ ಅಂದುಬಿಡಬೇಕೇ?!

ಹೆಂಡತಿಗೆ ಸಣ್ಣಗೆ ಆಘಾತ! ಸಿದ್ದಪ್ಪನವರು ಕೂಡಲೇ , ಹೆ ಹೆ ಇವನು ಕಣೇ.. ಇವನು ಸೋಮ ಅದೇ ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿ ಕೆಲ್ಸ ಮಾಡೋನು.. ಇಲ್ಲೇನೋ ಟೆಂಪರರಿ ಕೆಲಸ ಮಾಡ್ತಾ ಇರಬೇಕು ಅಂತ ಒಳ ಹೊರಟರು. ವೈಫು ಮೇಡಂಗೆ ಕೊಂಚ ಇರಿಸುಮುರಿಸಾದರೂ, ಅವರೂ ಒಳ ನಡೆದರು.

ಅಲ್ಲಿನ ಆಧುನಿಕ ಅಮರಾವತಿಯನ್ನ ನೋಡಿ ಪಾಪ ಸಿದ್ದಪ್ಪನವರ ಹೆಂಡ್ರು ಒಮ್ಮೆಗೆ ಕಂಗಾಲಾದರು! ಕಿವಿ ಹರಿದು ಹೋಗೋ ಹಾಗಿನ ಸದ್ದು, ತುಂಡು ಲಂಗದ ಲಲನೆಯರು, ಬೀರು ಬಾಟಲಿಗಳ ಠಣಠಣ ಸದ್ದಿಗೆ ದಿಕ್ಕು ತಪ್ಪಿದ ಹರಿಣದಂತೆ ಆಕೆ ತೆಪ್ಪಗಾದರು. ಆದರೆ ಸಿದ್ದಪ್ಪನವರೇನೂ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದಂತೆ ಕಂಡು ಬಂದಿದ್ದು, ಆಕೆಯನ್ನ ಮತ್ತಷ್ಟು ಹೈಲು ಮಾಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ವೈಟರ್ ಭೂಪತಿ, ಸರ್, ನಿಮ್ಮ ಮಾಮೂಲಿ ಬ್ರಾಂಡ್ ತರಲೋ, ಅಥವ ಹೊಸದೇನಾದರೂ ಬೇಕೋ ಸಿದ್ದಪ್ಪನವರೇ ಅಂದುಬಿಡೋದೇ?!

ಈಗ ಸಹಧರ್ಮಿಣಿಯವರ ತಲೆಯೊಳಗಿನ ಟ್ಯೂಬ್ ಲೈಟ್ ಪಕಪಕ ಅನ್ನಲಾರಂಭಿಸಿತ್ತು ನಿಧಾನಕ್ಕೆ . ಆದರೆ ಅವಳೇನೋ ಕೇಳೋ ಮೊದಲೇ "ಇವ್ನು ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿರೋ ಬಾರ್ ನ ಕೆಲಸಗಾರ. ಅಲ್ಲಿ ಅಪರೂಪಕ್ಕೆ ಗೆಳೆಯರಿಗೆ ಕಂಪನಿ ಕೊಡೋಕೆ ಕುಡೀತೀನಿ, ಸೋ. ಇವನಿಗೆ ನಾನು ಕುಡಿಯೋ ಬ್ರಾಂಡು ಗೊತ್ತು ಬಿಡು ಅನ್ನುತ್ತಲೇ ಗೋಬಿ ಮಂಚೂರಿಗೂ ಆರ್ಡರ್ ಮಾಡಿಬಿಟ್ಟರು.

ಟ್ಯೂಬ್ ಲೈಟಿಗೆ ಮತ್ತಷ್ಟು ವೋಲ್ಟೇಜ್ ಹರಿಯೋಕೆ ಶುರುವಾಗಿ ಇನ್ನೆರಡು ಬಾರಿ ಪಕ್ ಪಕ್ ಅಂತು.

ಸಿದ್ದಪ್ಪನವರ ಬಳಿ ಕ್ಲಾರಿಫಿಕೇಷನ್ ಕೇಳೋಕೆ ಮೊದಲೇ, ಅಲ್ಲಿಗೆ ಸಡನ್ನಾಗಿ ಬಂದ ಮಿನಿಲಂಗದ ಚೆಲುವೆಯೊಬ್ಬಳು, ಏನ್ ಸಿದ್ದಪ್ಪಾ ನನ್ ಮರ್ತೇ ಬಿಟ್ಟೆ ಅಂತ ಅಂದ್ಕೊಂಡಿದ್ನಪಾ ಅಂತ ಮಾದಕವಾಗಿ ನಕ್ಕು, ಎದೆಯಲುಗಿಸಿದಳು.

ಟ್ಯೂಬ್ ಲೈಟ್ ಹತ್ತಿಕೊಂಡು, ಝಗ್ಗನೆ ಬೆಳಕಾಯಿತು.

ಸಿಟ್ಟು ನೆತ್ತಿಗೇರಿ ಸಟ್ಟನೆದ್ದು ಹೊರಗೋಡುತ್ತಿದ್ದ ಹೆಂಡತಿಗೆ ಹೇ ಹೇ.. ಅವಳ್ಯಾರೋ ನನಗೆ ಗೊತ್ತಿಲ್ಲ.. ತಪ್ಪಾಗಿ ತಿಳ್ಕೊಂಬಿಟ್ಟಿದಾಳೆ ಅಂತ ಸಿದ್ದಪ್ನೋರು ತೊದಲೋ ಹೊತ್ತಿಗೆ ಆಕೆ, ರಸ್ತೆಗೆ ಬಂದು ನಿಂತಾಗಿತ್ತು..

ಸಿದ್ದಪ್ಪ ಆಕೆಯ ಸೆರಗು ಹಿಡಿದು ಬೇಡಿಕೊಳ್ಳುತ್ತಿದ್ದರೂ ಕೇಳದೇ, ರಸ್ತೆಯಲ್ಲೇ ಅವರ ಜನ್ಮಾ ಜಾಲಾಡೋಕೆ ಶುರು ಮಾಡಿದ ಹೆಂಡತಿ, ಅಲ್ಲೇ ಪಕ್ಕದಲ್ಲಿ ತೂಕಡಿಸುತ್ತ ಮಲಗಿದ್ದ ಆಟೋದವನ್ನ ತಿವಿದು ಒಳಗೆ ಕೂತಾಗಿತ್ತು.

ಸಿದ್ದಪ್ಪನವರು ಅಲ್ಲೇ ಪಕ್ಕಕ್ಕೆ ಹತ್ತಿ ಕೂತು, ಇಲ್ಲ ಕಣೇ .. ಹಾಗಲ್ಲ ಕಣೇ..ಅನ್ನೋದೂ.. ಅವಳು ನಾನು ಬರಲ್ಲ ನಿಮ್ಮ ಜೊತೆಗೆ , ನೀವೂ ನನ್ನ ಹಿಂದೆ ಬರ್ಬೇಡಿ ಇನ್ನು ಅಂತ ಕೂಗೋದೂ ನಡೆದೇ ಇದ್ದಾಗ, ಸರಿಯಾಗಿ ಎಚ್ಚೆತ್ತ ಆಟೋದ ಯಜಮಾನ್ರು,

"ಏನ್ ಸಿದ್ದಪ್ನೋರೇ, ಈ ಸಲ ಮಜಬೂತು ಕಡಕ್ ಹಕ್ಕಿನೇ ಸಿಕ್ಕಿರೋ ಹಾಗಿದೆ" ಅಂದರು.

ಇದೇ ಮುಂದಿನ ಬುಧವಾರ ಸಿದ್ದಪ್ಪನವರ ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ಆಮಂತ್ರಣ ಸಿಗದವರು ಇದನ್ನೇ ವೈಯಕ್ತಿಕ ಕರೆಯೋಲೆ ಎಂದು ಪರಿಗಣಿಸಬೇಕಾಗಿ ಕೋರಿಕೆ.

(ಇಂಗ್ಲೀಷ್ ಬ್ಲಾಗೊಂದರ ಬರಹದಿಂದ ಪ್ರೇರಿತ)

Tuesday, February 8, 2011

ಸಿದ್ದಪ್ಪನವರ ಕಥೆ

ಸಿದ್ದಪ್ಪ ದೊಡ್ಡ ಬ್ಯುಸಿನೆಸ್ ಮನ್. ದಿನಾ ಸಿಕ್ಕಾಪಟ್ಟೆ ಕೆಲಸ, ಮನೆಗೆ ಬರೋದು ಮಧ್ಯರಾತ್ರಿ ಕಳೆದ ಮೇಲೆಯೇ. ಗಂಡ ದಿನಾ ಹುಚ್ಚಾಪಟ್ಟೆ ಕೆಲಸ ಮಾಡಿ ಸುಸ್ತಾಗಿ ಬರೋದು ನೋಡಿ ಹೆಂಡತಿಗೂ ಬೇಜಾರು. ಆದರೇನು ಮಾಡೋದು?, ದೊಡ್ಡ ಹುದ್ದೆಗೆ ಹೋದ ಮೇಲೆ, ಜವಾಬ್ದಾರಿಗಳೂ ಹೆಚ್ಚುತ್ತವೆಯಲ್ಲ?..

ಸಿದ್ದಪ್ಪನಿಗಿದ್ದ ಏಕೈಕ ಹವ್ಯಾಸ ಅಂದರೆ ಅಪರೂಪಕ್ಕೊಮ್ಮೆ ಗಾಲ್ಫ್ ಆಡೋಕೆ ಹೋಗೋದು. ಅದು ಅವನ ಹೆಂಡತಿಗೂ ಗೊತ್ತು. ಎಲ್ಲಾದರೂ ವೀಕೆಂಡುಗಳಲ್ಲು ಸಿದ್ದಪ್ಪನವರು ಗಾಲ್ಫ್ ಕಿಟ್ ತಗೊಂಡು ಹೊರಬಿದ್ದರೆ ಮತ್ತೆ ಬರೋದು ರಾತ್ರಿಗೇ. ಪಾಪ, ಗಂಡ ಕೆಲ ಬಾರಿ ಶನಿವಾರ ಭಾನುವಾರಗಳಲ್ಲೂ ತನ್ನ ಜೊತೆ ಇರಲ್ಲ ಎಂಬ ಬೇಜಾರು ಇದ್ದರೂ, ವಾರವಿಡೀ ಕೆಲಸ ಮಾಡಿರುತ್ತಾರೆ ಸುತ್ತಾಡಿಕೊಂಡು ಬರಲಿ ಅನ್ನೋದು ಪತಿವೃತಾ ಶಿರೋಮಣಿ ಪತ್ನಿಯ ಅಭಿಪ್ರಾಯ.

ಆದರೆ ಇತ್ತೀಚಿಗೆ ಕೆಲ ದಿನಗಳಿಂದ ಸಿದ್ದಪ್ಪನವರು ಗಾಲ್ಫ್ ಕಡೆಗೂ ತಲೆ ಹಾಕಿರಲಿಲ್ಲ. ದಿನಾ ರಾತ್ರಿ ಎರಡು ಗಂಟೆ ಮೇಲೆಯೇ ಆಗಮನ, ಮತ್ತೆ ಗೊರಕೆ. ಯಾಕೋ ಸಂಸಾರ ಜೀವನದ ಸಾರ ಗಂಡನ ಬೋರಲು ಬಿದ್ದ ಬೆನ್ನು ನೋಡಿಯೇ ಕಳೆದು ಹೋಗುತ್ತಿರುವುದನ್ನ ಅರಿತ ಪತ್ನಿ ಇದಕ್ಕೇನಾದರೂ ಪರಿಹಾರ ಹುಡುಕಬೇಕು ಅಂತ ನಿರ್ಧಾರ ಮಾಡಿದಳು.

ಅವಳ ಲೇಡೀಸು ಕ್ಲಬ್ಬಿನ ಮಿತ್ರೆಯೊಬ್ಬಳು, ನೋಡು ಗಂಡನ ಲೈಫನ್ನ ನೀನೇ ಸರಿ ಮಾಡಬೇಕು.. ಅವರಿಗೆ ಜೀವನದಲ್ಲಿ ಬೇರೇ ಲವಲವಿಕೆಯ ವಿಚಾರಗಳು ಇರುತ್ತವೆ ಅನ್ನೋದನೂ ತೋರಿಸಬೇಕು ಅಂದಳು ಮತ್ತು ಅದಕ್ಕೆ ಸರಿಯಾದ ಸಲಹೆಗಳನ್ನೂ ಕೊಟ್ಟಳು- ಸಿದ್ದಪ್ಪಾವ್ರನ್ನ ಮೊದಲು ಈ ಪಬ್ಬು ಗಿಬ್ಬಿಗೆ ಕರ್ಕೊಂಡು ಹೋಗು, ಅಲ್ಲೆಲ್ಲ ಹುಡುಗ್ರು - ಹುಡ್ಗೀರು ಅವರ ಕುಣಿತ-ಕುಡಿತ ಇದೆಲ್ಲ ನೋಡಿ ಅವರಿಗೊಂದು ಹುಮ್ಮಸ್ಸು ಬರಬೋದು, ಅವರಿಗೂ ಸ್ವಲ್ಪ ತಗೋಳೋ ಹಾಗೆ ಮಾಡು, ಮೊದಲಿಗೆ ಸ್ವಲ್ಪ ಕಷ್ಟ ಅನ್ನಿಸಿದ್ರೂ ಆಮೇಲಾಮೇಲೆ ಅಭ್ಯಾಸ ಆಗತ್ತೆ ಅಂತ.

ಜೈ ತಗಳಪ, ಸಿದ್ದಪ್ಪನವರು ಈ ಶುಕ್ರವಾರ ಮನೆಗೆ ಬರೋದನ್ನೇ ಕಾಯ್ತಿದ್ದ ವೈಫು, ಲಕಲಕ ಡ್ರೆಸ್ಸು ಮಾಡಿಕೊಂಡಿದ್ದಳು. ಸಿದ್ದಪ್ಪಾವರು ಏನಿದು ವಿಚಾರ ಅಂತ ಕೇಳೋಕೆ ಮುನ್ನವೇ, ಅವರ ಟೈ ಕಿತ್ತು ಹಾಕಿ ಎಳಕೊಂಡು ಹೊರಟೇ ಬಿಟ್ಟಳು. ದಾರಿಯಲಿ ಸಿಕ್ಕಿದ ಯಾವುದೋ ಕ್ಯಾಬು ಹತ್ತಿ ಮೊದಲೇ ತಿಳಕೊಂಡಿದ್ದ ನಗರದ ಉತ್ತಮ ಪಬ್ಬೊಂದರ ಹೆಸರನ್ನ ಡ್ರೈವರಿಗೆ ವದರಿದಳು. ಅದನ್ನ ಕೇಳಿದ್ದೇ ಸಿದ್ದಪ್ಪನವರು ಆಘಾತಕ್ಕೊಳಗಾಗಿ ಎಲ್ಲಿಗೆ ಹೊರಟಿದ್ದೇವೆ ಎಂದು ಕೇಳಿದಾಗ , ಹೀಗೀಗೆ, ಸುಮ್ಮನೇ ರಿಲ್ಯಾಕ್ಸ್ ಆಗೋಕೆ.. ಅಂತೆಲ್ಲ ಶಾರ್ಟ್ ಅಂಡ್ ಸ್ವೀಟ್ ಆಗಿ ವಿಚಾರ ತಿಳಿಸಿ ಸುಮ್ಮನಾದಳು. ಪಕ್ಕದಲ್ಲಿ ಕೂತಿದ್ದ ಸಿದ್ದಪ್ಪನವರು ಸಿಕ್ಕಾಪಟ್ಟೆ ಕೊಸರಾಡುತ್ತಿದ್ದರೂ, ಅಸಮಾಧಾನದಲ್ಲಿ ಗೊಣಗಾಡುತ್ತಿದ್ದರೂ ಈಕೆ ಕ್ಯಾರೇ ಅನ್ನಲಿಲ್ಲ.

ಝಗಮಗ ಮಿಂಚುತ್ತಿದ್ದ ಪಬ್ಬಿನ ಹೊರಗೆ ನಿಂತ ಸಿದ್ದಪ್ಪನವರು ಅಲ್ಲಿಂದ ವಾಪಾಸು ಹೋಗೋಕೆ ಹವಣಿಸುತ್ತಿದ್ದಾಗಲೇ ಅವರ ಧರ್ಮಪತ್ನಿ ಅವರನ್ನು ಒಳಗೆಳೆದುಕೊಂಡು ಹೊರಟೇ ಬಿಟ್ಟಳು, ಹೊಸ ಕನಸುಗಳ ಲೋಕ ತೆರೆದೇ ಬಿಟ್ಟಿದೆ ಎಂಬ ಆಸೆಯಲ್ಲಿ. ಅಷ್ಟರಲ್ಲಿ ಒಂದು ಅಚ್ಚರಿ ಸಂಭವಿಸಿತು.ಬಾಗಿಲಲ್ಲೇ ಇದ್ದ ದಪ್ಪ ಮೀಸೆಯ ಟೊಪ್ಪಿವಾಲ ಸಿದ್ದಪ್ಪರನ್ನ ನೋಡಿ, ಟಪ್ ಅಂತ ಕಾಲೆತ್ತಿ ಸೆಲ್ಯೂಟ್ ಹೊಡೆದು, ವೆಲ್ಕಂ ಸಿದ್ದಪ್ಪಾ ಸರ್ ಅಂದುಬಿಡಬೇಕೇ?!

ಹೆಂಡತಿಗೆ ಸಣ್ಣಗೆ ಆಘಾತ! ಸಿದ್ದಪ್ಪನವರು ಕೂಡಲೇ , ಹೆ ಹೆ ಇವನು ಕಣೇ.. ಇವನು ಸೋಮ ಅದೇ ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿ ಕೆಲ್ಸ ಮಾಡೋನು.. ಇಲ್ಲೇನೋ ಟೆಂಪರರಿ ಕೆಲಸ ಮಾಡ್ತಾ ಇರಬೇಕು ಅಂತ ಒಳ ಹೊರಟರು. ವೈಫು ಮೇಡಂಗೆ ಕೊಂಚ ಇರಿಸುಮುರಿಸಾದರೂ, ಅವರೂ ಒಳ ನಡೆದರು.

ಅಲ್ಲಿನ ಆಧುನಿಕ ಅಮರಾವತಿಯನ್ನ ನೋಡಿ ಪಾಪ ಸಿದ್ದಪ್ಪನವರ ಹೆಂಡ್ರು ಒಮ್ಮೆಗೆ ಕಂಗಾಲಾದರು! ಕಿವಿ ಹರಿದು ಹೋಗೋ ಹಾಗಿನ ಸದ್ದು, ತುಂಡು ಲಂಗದ ಲಲನೆಯರು, ಬೀರು ಬಾಟಲಿಗಳ ಠಣಠಣ ಸದ್ದಿಗೆ ದಿಕ್ಕು ತಪ್ಪಿದ ಹರಿಣದಂತೆ ಆಕೆ ತೆಪ್ಪಗಾದರು. ಆದರೆ ಸಿದ್ದಪ್ಪನವರೇನೂ ತಲೆಕೆಡಿಸಿಕೊಳ್ಳದೇ, ಆರಾಮಾಗಿದ್ದಂತೆ ಕಂಡು ಬಂದಿದ್ದು, ಆಕೆಯನ್ನ ಮತ್ತಷ್ಟು ಹೈಲು ಮಾಡಿತು.

ಅಷ್ಟರಲ್ಲಿ ಅಲ್ಲಿಗೆ ಬಂದ ವೈಟರ್ ಭೂಪತಿ, ಸರ್, ನಿಮ್ಮ ಮಾಮೂಲಿ ಬ್ರಾಂಡ್ ತರಲೋ, ಅಥವ ಹೊಸದೇನಾದರೂ ಬೇಕೋ ಸಿದ್ದಪ್ಪನವರೇ ಅಂದುಬಿಡೋದೇ?!

ಈಗ ಸಹಧರ್ಮಿಣಿಯವರ ತಲೆಯೊಳಗಿನ ಟ್ಯೂಬ್ ಲೈಟ್ ಪಕಪಕ ಅನ್ನಲಾರಂಭಿಸಿತ್ತು ನಿಧಾನಕ್ಕೆ . ಆದರೆ ಅವಳೇನೋ ಕೇಳೋ ಮೊದಲೇ "ಇವ್ನು ನಾನು ಗಾಲ್ಫ್ ಆಡ್ತೀನಲ್ಲ, ಅಲ್ಲಿರೋ ಬಾರ್ ನ ಕೆಲಸಗಾರ. ಅಲ್ಲಿ ಅಪರೂಪಕ್ಕೆ ಗೆಳೆಯರಿಗೆ ಕಂಪನಿ ಕೊಡೋಕೆ ಕುಡೀತೀನಿ, ಸೋ. ಇವನಿಗೆ ನಾನು ಕುಡಿಯೋ ಬ್ರಾಂಡು ಗೊತ್ತು ಬಿಡು ಅನ್ನುತ್ತಲೇ ಗೋಬಿ ಮಂಚೂರಿಗೂ ಆರ್ಡರ್ ಮಾಡಿಬಿಟ್ಟರು.

ಟ್ಯೂಬ್ ಲೈಟಿಗೆ ಮತ್ತಷ್ಟು ವೋಲ್ಟೇಜ್ ಹರಿಯೋಕೆ ಶುರುವಾಗಿ ಇನ್ನೆರಡು ಬಾರಿ ಪಕ್ ಪಕ್ ಅಂತು.

ಸಿದ್ದಪ್ಪನವರ ಬಳಿ ಕ್ಲಾರಿಫಿಕೇಷನ್ ಕೇಳೋಕೆ ಮೊದಲೇ, ಅಲ್ಲಿಗೆ ಸಡನ್ನಾಗಿ ಬಂದ ಮಿನಿಲಂಗದ ಚೆಲುವೆಯೊಬ್ಬಳು, ಏನ್ ಸಿದ್ದಪ್ಪಾ ನನ್ ಮರ್ತೇ ಬಿಟ್ಟೆ ಅಂತ ಅಂದ್ಕೊಂಡಿದ್ನಪಾ ಅಂತ ಮಾದಕವಾಗಿ ನಕ್ಕು, ಎದೆಯಲುಗಿಸಿದಳು.

ಟ್ಯೂಬ್ ಲೈಟ್ ಹತ್ತಿಕೊಂಡು, ಝಗ್ಗನೆ ಬೆಳಕಾಯಿತು.

ಸಿಟ್ಟು ನೆತ್ತಿಗೇರಿ ಸಟ್ಟನೆದ್ದು ಹೊರಗೋಡುತ್ತಿದ್ದ ಹೆಂಡತಿಗೆ ಹೇ ಹೇ.. ಅವಳ್ಯಾರೋ ನನಗೆ ಗೊತ್ತಿಲ್ಲ.. ತಪ್ಪಾಗಿ ತಿಳ್ಕೊಂಬಿಟ್ಟಿದಾಳೆ ಅಂತ ಸಿದ್ದಪ್ನೋರು ತೊದಲೋ ಹೊತ್ತಿಗೆ ಆಕೆ, ರಸ್ತೆಗೆ ಬಂದು ನಿಂತಾಗಿತ್ತು..

ಸಿದ್ದಪ್ಪ ಆಕೆಯ ಸೆರಗು ಹಿಡಿದು ಬೇಡಿಕೊಳ್ಳುತ್ತಿದ್ದರೂ ಕೇಳದೇ, ರಸ್ತೆಯಲ್ಲೇ ಅವರ ಜನ್ಮಾ ಜಾಲಾಡೋಕೆ ಶುರು ಮಾಡಿದ ಹೆಂಡತಿ, ಅಲ್ಲೇ ಪಕ್ಕದಲ್ಲಿ ತೂಕಡಿಸುತ್ತ ಮಲಗಿದ್ದ ಆಟೋದವನ್ನ ತಿವಿದು ಒಳಗೆ ಕೂತಾಗಿತ್ತು.

ಸಿದ್ದಪ್ಪನವರು ಅಲ್ಲೇ ಪಕ್ಕಕ್ಕೆ ಹತ್ತಿ ಕೂತು, ಇಲ್ಲ ಕಣೇ .. ಹಾಗಲ್ಲ ಕಣೇ..ಅನ್ನೋದೂ.. ಅವಳು ನಾನು ಬರಲ್ಲ ನಿಮ್ಮ ಜೊತೆಗೆ , ನೀವೂ ನನ್ನ ಹಿಂದೆ ಬರ್ಬೇಡಿ ಇನ್ನು ಅಂತ ಕೂಗೋದೂ ನಡೆದೇ ಇದ್ದಾಗ, ಸರಿಯಾಗಿ ಎಚ್ಚೆತ್ತ ಆಟೋದ ಯಜಮಾನ್ರು,

"ಏನ್ ಸಿದ್ದಪ್ನೋರೇ, ಈ ಸಲ ಮಜಬೂತು ಕಡಕ್ ಹಕ್ಕಿನೇ ಸಿಕ್ಕಿರೋ ಹಾಗಿದೆ" ಅಂದರು.

ಇದೇ ಮುಂದಿನ ಬುಧವಾರ ಸಿದ್ದಪ್ಪನವರ ವೈಕುಂಠ ಸಮಾರಾಧನೆ ಏರ್ಪಡಿಸಲಾಗಿದೆ. ಆಮಂತ್ರಣ ಸಿಗದವರು ಇದನ್ನೇ ವೈಯಕ್ತಿಕ ಕರೆಯೋಲೆ ಎಂದು ಪರಿಗಣಿಸಬೇಕಾಗಿ ಕೋರಿಕೆ.

(ಇಂಗ್ಲೀಷ್ ಬ್ಲಾಗೊಂದರ ಬರಹದಿಂದ ಪ್ರೇರಿತ)

Tuesday, June 17, 2008

ಎಲ್ಲದಕು ಕಾರಣನು ಈ ಯಡಿಯೂರಪ್ಪ!


’ಪದ್ಮಪ್ರಿಯ ಅಮ್ಮೋರು ಸಿಕ್ಕೋರಂತೆ!’ ಎಂದು ತಿಮ್ಮಕ್ಕ ಜಗುಲಿ ಗುಡಿಸುತ್ತ ಆಶ್ಚರ್ಯ ತೋರಿಸಿದ್ದನ್ನು ನಾನು ಅದೊಂದು ಪ್ರಶ್ನೆಯೋ ಅಥವಾ ವಿಶ್ಲೇಷಣೆಯೋ ಎಂದು ಆಲೋಚಿಸುತ್ತಾ ಏನು ಉತ್ತರ ಹೇಳಲಿ ಎಂದು ಗೊಂದಲದಲ್ಲಿದ್ದಾಗ ನನ್ನ ಸಹಾಯಕ್ಕೆ ಬಂದವನು ನಂಜ.

’ತಾಯೀ, ಕೆಲ್ಸಾ ನೋಡು. ಆವಮ್ಮಾ ಯಾರ್ನೋ ಕೂಡಿಕ್ಯಂಡ್ ಗುಳೇ ಬಿದ್ದು ಹೋಗ್ಯಾಳೆ, ಅವಳು ಸಿಕ್ರೆಷ್ಟು ಬಿಟ್ರೆಷ್ಟು!’ ಎಂದು ನಂಜ ಹಂಗಿಸಿದ್ದನ್ನು ಕೇಳಿ ತನ್ನ ಕೈಲಿದ್ದ ಪೊರಕೆಯನ್ನು ಅಲ್ಲೇ ಬಿಸಾಡಿ ಸೆರಗಿನ ತುದಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡು ಜಗಳಕ್ಕೆ ಬಂದವಳಂತೆ ಕೈ ಬಾಯಿ ಮುಂದೆ ಮಾಡಿಕೊಂಡು ಬಂದ ತಿಮ್ಮಕ್ಕ,

’ಲೇ, ಯಾವನಿಗ್ ಹೇಳ್ತಿ...ಈ ವಯ್ಯಾ ಅದ್ಯಾರ್ನೋ ಇಟ್‌ಕಂಡಿದ್ನಲಾ ಅದು ತಪ್ಪಲ್ವಾ, ಈ ಹಾಳ್ ಸಮಾಜಕ್ಕೆ ಬರೀ ಹೆಂಗುಸ್ರುದ್ದೇ ಕಾಣ್ಸುತ್ತೇ’ ಎಂದು ಹೇಳುತ್ತಾ ಕೈ ನಟಿಕೆ ಮುರಿದಳು. ತಿಮ್ಮಕ್ಕನ ಆರ್ಭಟವನು ನೋಡಿದ ನಂಜ, ಇದೇನ್ ಇವ್ಳು ಇದ್ದಕ್ಕಿದ್ದಂಗೇ ರಾಂಗ್ ಆಗವಳೇ, ಒಳ್ಳೇ ಪದ್ಮಪ್ರಿಯನ ಅವ್ವ ಆಡಿದಂಗೆ ಆಡ್ತವಳಲ್ಲಾ ಎಂದು ಮೂಗಿನ ಮೇಲೆ ಬೆಟ್ಟಿಡುತ್ತಾ ನನ್ನ ಕಡೆ ನೋಡಿದ, ನಾನು

’ನಂಜಾ, ಸುಮ್ನಿರು, ನಿನಗೊತ್ತಿರದ ವಿಷ್ಯಕ್ಯಾಕೆ ಕೈ ಹಾಕ್ತಿ?’ ಎಂದು ಇಬ್ಬರನ್ನೂ ಸಂತೈಸುವ ಹಾಗೆ ನೋಡಿದೆ, ಅದೇ ಟೈಮಿಗೆ ಕೋಡೀಹಳ್ಳಿ ಮೇಷ್ಟ್ರು ದರ್ಶನವಾಯ್ತು. ಒಂದು ಆಂಗಲ್ಲಿನಿಂದ ನೋಡಿದ್ರೆ ಸೂಟುಧಾರಿಗಳ ನಡುವೆ ಬಿಳಿಪಂಚೆ-ಅಂಗಿ ತೊಟ್ಟ ಸೆಂಟ್ರಲ್ ಮಿನಿಷ್ಟ್ರು ಚಿದಂಬರಂ ಕಂಡಂಗೆ ಕಾಣ್ತ ಇದ್ರು.

ನಂಜ ತಿಮ್ಮಕ್ಕನಿಂದ ದೃಷ್ಟಿ ಸರಿಸಿ ಮೇಷ್ಟ್ರನ್ನು ಕುರಿತು, ’ಏನ್ಸಾರ್‍, ಒಳ್ಳೇ ಯಡಿಯೂರಪ್ಪನ ಗತ್ತ್ ಬಂದಂಗೆ ಕಾಣ್ತತಿ ನಿಮ್ಮ್ ಮುಖದ ಮ್ಯಾಲೆ, ಏನ್ ಸಮಾಚಾರ? ಎಲ್ಲೋ ಮದುವಿ-ಪದುವಿಗೆ ಹೊಂಟ್ ನಿಂತಂಗ್ ಕಾಣ್ತತಲ್ಲ!’ ಎಂದು ಛೇಡಿಸಿದ.

ಮೇಷ್ಟ್ರು, ’ಏನಿಲ್ಲ ಕಣ್ಲೇ, ಸುಮ್ಕೇ. ಅದಿರ್ಲಿ ನಾನು ನಾನಿದ್ದಂಗೆ ಕಂಡ್ರೆ ಸಾಕು, ಯಾರ್ ಬಾಳ್ವೇನಾದ್ರೂ ಬೇಕು ಆ ಯಡಿಯೂರಪ್ಪನ್ನ ಬಾಳ್ವೆ ಯಾವನಿಗೂ ಬ್ಯಾಡಪ್ಪಾ!’ ಎಂದು ನಿಟ್ಟುಸಿರುಬಿಟ್ಟರು.

’ಅದ್ಯಾಕ್ ಸಾರ್, ಇಷ್ಟು ದಿನಾ ಅವ್ನೇ ಮುಖ್ಯಮಂತ್ರಿ ಆಗ್ಲಿ ಅಂತ ವಾದಾ ಮಾಡ್ತಿದ್ರಿ, ಇವತ್ತು ಅಂತಾದೇನಾತೂ?’ ಎಂದು ನಂಜ ತನ್ನ ಮುಳ್ಳನ್ನು ಬಲವಾಗಿ ತಳ್ಳಲು ನೋಡಿದ,

’ವಿರೋಧ ಪಕ್ಷದವರು ಅಂದ್ರೆ ನಾಮರ್ದ್‌ರಾಗಿ ಹೋಗವ್ರೆ, ಮಾತ್ ಎತ್ತಿದ್ರೆ...ಎಲ್ಲದಕೂ ಈ ಯಡಿಯೂರಪ್ಪನೇ ಕಾರ್ಣಾ ಅಂತ ಕೈ ಬೊಟ್ಟು ಮಾಡಿ ತೋರಿಸ್ತವ್ರೆ, ಇತ್ಲಾಗೆ ಯಾವನರ ಸಾಯ್ಲಿ, ಅತ್ಲಾಗೆ ಯಾವಂದಾರ ಹೆಂಡ್ತಿ ಮನೆ ಬಿಟ್ಟು ಹೋಗ್ಲಿ, ಎಲ್ಲದ್ಕೂ ಯಡಿಯೂರಪ್ಪಂದೇ ಮಧ್ಯಸ್ತಿಕಿ ಬೇಕು ನೋಡು. ಈ ನನ್ ಮಕ್ಳಿಗೆ ಅವನನ್ನ ಕಾಲ್ ಹಿಡಿದು ಕೆಳಾಕ್ ತಳ್ಳೋತಂಕ ಸಮಾಧಾನ ಇಲ್ಲಾ ನೋಡು!’

ನಂಜ ಸುಮ್ನೇ ಬಿಡೋ ಹಾಗೆ ಕಾಣ್ಲಿಲ್ಲ, ’ಸುಮ್ನಿರ್ರೀ, ಮತ್ತೆ ಯಡಿಯೂರಪ್ಪಾ ಅಪೋಜಿಷನ್ನಿನ್ಯಾಗ್ ಇದ್ದಾಗ್ ಮಾಡಿದ್ದೇನ್ ಮತ್ತೆ, ಅವರ ಮಂತ್ರ ಇವತ್ತು ಅವರಿಗೇ ತಿರುಮಂತ್ರ ಆಗೋದ್ ನ್ಯಾಯಾ ಅಲ್‌ವ್ರಾ?’

’ಅಪೋಜಿಷನ್ನಿನ್ಯಾಗ್ ನಿಂತು ನ್ಯಾಯಾನ್ಯಾಯಾ ಕೇಳ್ಲಿ ಯಾರ್ ಬ್ಯಾಡಾ ಅಂದೋರು, ಅದ್ಯಾವ್ದೋ ಉಡುಪಿ ಶಾಸಕನ ಹೆಂಡ್ತಿ ಎತ್ಲಗೋ ಹೋಗಿ ಸತ್ರೆ ಅದಕ್ಕೂ ಯಡಿಯೂರಪ್ಪ ನೈತಿಕ ಹೊಣೇ ಹೊತ್ಕಂಡ್ ರಾಜೀನಾಮೇ ಕೊಡೋಕೂ ಏನ್ ಸಂಬಂಧಾ ಅಂತೀನಿ...’

’ಅಲ್ಲೇ ವಿಶೇಷ ಇರೋದ್ ನೋಡ್ರಿ ಮೇಷ್ಟ್ರೆ, ಇದು ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಇರೋ ಸರ್ಕಾರದ ವ್ಯವಸ್ಥೆ ಅಲ್ಲವ್ರಾ, ಅದರಾಗ ಜನಮನದಲ್ಲಿ ಏನೇ ಇದ್ರೂ ಅದಕ್ಕೆಲ್ಲ ಮುಖ್ಯಮಂತ್ರಿಗಳೇ ಹೊಣೇ, ಹಂಗಾಗಿ ಯಡಿಯೂರಪ್ಪ ರಾಜೀನಾಮೆ ಕೊಡಬೇಕು, ಮತ್ತೆ ಎಲೆಕ್ಷನ್ನ್ ನಡೀಬೇಕು, ದೊಡ್ಡಗೌಡ್ರ ಬಳಗದವ್ರೋ-ಖರ್ಗೇನೋ ಅಧಿಕಾರಕ್ಕೆ ಬರ್ಬಕು, ಅದೇ ರಾಮರಾಜ್ಯಾ ನೋಡ್ರಿ...’ ಎಂದು ಗಹಗಹಿಸಿ ನಗಲಾರಂಭಿಸಿದ್ದನ್ನು ನೋಡಿ, ಅದರಲ್ಲೂ ಯಡಿಯೂರಪ್ಪಾ ಮತ್ತು ರಾಜೀನಾಮೆ ಅನ್ನೋ ಪದಗಳನ್ನ ಒಂದೇ ವಾಕ್ಯದಲ್ಲಿ ಕೇಳಿ ಮೇಷ್ಟ್ರಿಗೆ ಬಹಳ ಉರಿದುಕೊಂಡು ಹೋಯ್ತು ಅಂತ ಕಾಣ್ಸುತ್ತೆ, ತಮ್ಮ ಕೈಲಿದ್ದ ಛತ್ರಿಯಿಂದಲೇ ನಂಜನನ್ನು ತಿವಿಯುವುದಕ್ಕೆ ಬಂದರೆ ಅವನು ಹೆದರಪುಕ್ಕಲನಂತೆ ಹಿಂದೆ ಸರಿದು ತಪ್ಪಿಸಿಕೊಳ್ಳುವ ಆಟ ಒಂದು ಕ್ಷಣದಲ್ಲಿ ನಡೆಯಿತು.

ನಾನೆಂದೆ, ’ಲೇ ನಂಜಾ, ಯಾಕೋ ನೀನು ಎದ್ದ ಘಳಿಗೆ ನೆಟ್ಟಗಿಲ್ಲ ಇವತ್ತು, ಸೀದಾ ಮನೀಗ್ ಹೋಗು ಇಲ್ಲಾ ಕಷ್ಟಾ ಐತಿ ನೋಡು’ ಎಂದು ನಗುತ್ತ ಗದರಿಸಿದ್ದನ್ನು ನಂಜ ಸೀರಿಯಸ್ಸಾಗಿ ಸ್ವೀಕರಿಸಿ ಮನೆಕಡಿಗೆ ಹೊರಟಾಗ ಬಿಗುವಿನ ವಾತಾವರಣ ತಿಳಿಗೊಂಡಿತು.
ಎಲ್ಲೋ ನೋಡಿದ ನೆನಪು ಬಣ್ಣಬಣ್ಣದಾ
ಬಾನಿನಲ್ಲೋ ತಾರೆಗಳ ಗು೦ಪಿನಲ್ಲೋ
 ಮೋಡಗಳ ಚೆಲುವಿನಲ್ಲೋ
ಮೈತು೦ಬ ಸೀರೆಯುಟ್ಟು,
ಹಣೆಗೆ ಕು೦ಕುಮದ ಬೊಟ್ಟನಿಟ್ಟು,
ಕೈತು೦ಬ ಹಸಿರು ಬಳೆಯ ತೊಟ್ಟು, ಬಳಕುತ್ತ, ಬಾಗುತ್ತ,
ಬೆಳದಿ೦ಗಳ ಬಾಲೆಯ೦ತೆ ಬರುತ್ತಿರಲು,
ವಸ೦ತಮಾಸವೇ ನಾಚುವ೦ತಿತ್ತು ನಿನ್ನ ನಡೆಗೆ,
ಅ೦ದು ಮು೦ಜಾನೆ ಹೊ೦ಗಿರಣಗಳ ನಡುವೆ ನೀ ಕ೦ಡಾಗ
ಅಪೂರ್ವ ವೈಢೂರ್ಯ ಕ೦ಡಾಯ್ತು ಎನಗೆ
ಅ೦ದಿನಿ೦ದ ನನ್ನ ಹೃದಯಕಮಲದಲ್ಲಿ ನೀನೇ ನನ್ನ ಆರಾಧ್ಯದೇವತೆ
ನನ್ನ ಹೃದಯದ ಅಮೃತಕಲಶ ದೋಚಿದ ಮನದನ್ನೆ ನೀ
ನೀನೊಮ್ಮೆ ನನ್ನ ಕಡೆ ತಿರುಗಿದರೆ ಸಾಕು
ನನ್ನ ಮನ ರೋಮಾ೦ಚನ
ನಿನ್ನ ಹೊಳಪು ಕ೦ಗಳಲ್ಲೇ ನನ್ನ ಜೀವನದ ಏಳು ಬೀಳು ಅಡಗಿದೆ
ನಿನ್ನ ಕಣ್ದೆರೆದರೆ ಸೂರ್ಯೋದಯ
ನಿನ್ನ ಕಣ್ಮುಚ್ಚಿದರೆ ಗಾಢಾ೦ಧಕಾರ
ನಿನ್ನ ಕಣ್ಣ ಬಡಿತಗಳಲ್ಲೆ ನನ್ನ ಹುಟ್ಟು ಸಾವು ಅಡಗಿದೆ
ನಿನ್ನ ತೋಳುಗಳ ಬಳಸಿ ಬಿಸಿ ಅಪ್ಪುಗೆಯಲ್ಲಿ ನನ್ನ ಕರಗಿಸು
ನಿನ್ನ ಪ್ರೇಮಸಾಗರದಲ್ಲಿ ತೇಲುವ ಮೀನು ನಾನು
ಜನ್ಮಜನ್ಮಕೂ ನೀನೇ ನನ್ನ ಹೃದಯ ಸಾಮ್ರಾಜ್ಣಿ
ಜನ್ಮಜನ್ಮಕೂ ನನ್ನ ಪ್ರೀತಿ ನಿನಗಾಗಿ
ನನ್ನಾಣೆ-ನಿನ್ನಾಣೆ- ದೇವರಾಣೆ

ವರನೀಡು ವಿಘ್ನೇಶ್ವರ

ವರನೀಡು ವಿಘ್ನೇಶ್ವರ

ವರನೀಡು ವಿಘ್ನೇಶ್ವರ ಗೌರೀಸುತನೇ ವಿಘ್ನವಿನಾಶನೆ
ಕರಮುಗಿದು ನಿನ್ನ ಸನಿಹಕೆ ಬ೦ದಿಹೆ!
ಶರಣರ ಸಲಹುವ ಸಕಲರ ನಿಧಿಯೇ
ಬೇಡಿದ ವರಗಳ ದಯಪಾಲಿಸು ನೀ!!
ನಿನ್ನಯ ಮಸ್ತಕ ಜಗದ ಪುಸ್ತಕ
ದುಸ್ತರ ಬದುಕಿಗೆ ಆಶಾಕಿರಣ!
ನೀನೇ ರವಿಯು ನೀನೇ ಚ೦ದ್ರನು
ಎನ್ನಯ ಬಾಳಿಗೆ ಸುಜ್ನಾನದಕಿರಣ!!
ಅನುಪಮ ನಿಧಿಯು ನಿನ್ನಯ ಸನ್ನಿಧಿ
ದಿವ್ಯತೆ,ಭವ್ಯತೆ ನಿನ್ನಾ ಮಡಿಲು
ಸ್ತುತಿಸದೆ ತೊರೆದ ಕ್ಷಣಗಳ ಮರೆ ನೀ
ಗತಿಸಿದ ಕಾಲಕೆ ಮನ್ನಿಸು ನನ್ನಾ!!
ಈಶನ ಸುತನೂ ವಿದ್ಯೆಗೆ ಪಿತನೂ
ಮೂಷಿಕವಾಹನ ಮೋದಕಪ್ರಿಯನೂ
ಚಾಮರಕರ್ಣ ವಿಡ೦ಬಿತಸೂತ್ರನೆ

ಕೃಪೆ ಮಾಡೀ ಬೆಳಗಿಸು ಬಾಳನು!!

ಬುಧವಾರ, ಜುಲೈ 2, 2014

ಕವಿಮಿತ್ರನಿಗೆ ಶ್ರದ್ದಾ೦ಜಲಿ

ಕವಿಮಿತ್ರನಿಗೆ ಶ್ರದ್ದಾ೦ಜಲಿ
ಓ ವೀರೇಶ
ಓ ವೀರೇಶ ನೀ ಕಾಣದ ಲೋಕಕೆ ಬಹುಬೇಗ ಹಾರಿಹೋದೆ!
ನನ್ನ ಕೈಗಳು ಅದೇಕೋ ನಡಗುತ್ತಿವೆ ಇ೦ದು!
ಅದೇನೆಲ್ಲಾ ಕನಸುಗಳಿದ್ದವೋ! ಅದೇನೆಲ್ಲಾ ಬಯಸಿದ್ದವೋ !
ಆ ಕಾಲನ ಮು೦ದೆ ನಾವೆಲ್ಲಾ ಕ್ಷಣಮಾತ್ರವು!
ಅನ್ನಿಸಿತು ನಿನ್ನ ಅಕಾಲಮೃತ್ಯು!
ನಾಗಲಕ್ಷ್ಮಿಗೆ ಒಡೆಯನಾಗಿದ್ದ ನೀನು
ಆಕೆಯನ್ನು ದುಃಖದ ಕಡಲಿಗೆ ದೂಡಿ
ಅದೇಕಿಷ್ಟು ಬೇಗ ನೇಪಥ್ಯಕ್ಕೆ ಸರಿದೆ?!
ಅಂದು ಬೆಂಗಳೂರಿನಲ್ಲಿ ನಾ ಮೊದಲು
ನಿನ್ನನ್ನೇ ಕವಿಗೋಷ್ಠಿಯಲ್ಲಿ ಕಂಡದ್ದು!
ಅದೂ ಪ್ರತಿಭಾಸ್ಪಂದನದಲ್ಲಿ!
ಆ ನಿನ್ನ ಬೊಗಸೆಕಂಗಳು
ಅದೇನೆಲ್ಲಾ ಮಿಂಚು ಹೊರಸೂಸುತ್ತಿತ್ತು
ನಿನ್ನ ಉಜ್ವಲ ಭವಿಷ್ಯವನ್ನು ಹೊರಹಾಕುತ್ತಿತ್ತು
ಆ ನಿನ್ನ ಜಾನಪದ ಗೀತೆಗಳ ಹಾಡುವ ಪರಿ
ನಮ್ಮನೆಲ್ಲಾ ಯಾವುದೋ ಲೋಕಕ್ಕೆ ಕರೆದೊಯ್ಯುತ್ತಿತ್ತು
ಸಾಹಿತ್ಯಲೋಕಕ್ಕೆ ನಿನ್ನ ಕಾರ್ಡಿನಲ್ಲಿ ಕವನ,ರೈಲಿನಲ್ಲಿ ಕವಿಗೋಷ್ಠಿ,
ನಿಜಕ್ಕೂ ನೀನು ಹಾಕಿಕೊಟ್ಟ ಹೊಸ ಆಯಾಮವಾಗಿತ್ತು!
ಓ ವೀರೇಶ್ ಸಾಹಿತ್ಯ ಸಾಧನೆಯನ್ನು
ಗುರಿಮುಟ್ಟಿರುವುದಕ್ಕೆ ನಿನ್ನ ಪಿ.ಎಚ್.ಡಿ ಪದವಿಯೇ ಸಾಕ್ಷಿ!!
ಬಳ್ಳಾರಿಯಲ್ಲಿ ಹುಟ್ಟಿ, ದಳ್ಳುರಿಯಲ್ಲಿ ಬೆಂದು,
ಹಲವಾರು ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ನಿಮ್ಮ ಸೇವೆ ಕಂಡು
ಆ ಜವರಾಯನೂ ಅಸೂಯೆ ಪಟ್ಟನೇನೋ!!
ನಿನ್ನೊಡನೆ ಅಂದು ಸಾಹಿತ್ಯಪರಿಷತ್ತಿನಲ್ಲಿ
ನಾನು ಒಂದು ವಾರವಿದ್ದೆ
ನಾವೀರ್ವರೂ ಸಾಹಿತ್ಯ ಚಟುವಟಿಕೆಗಳನ್ನು
ತರಬೇತಿಯಲ್ಲಿ ಹಂಚಿಕೊಂಡಿದ್ದೆವು!!
ನಿನಗೆ ಈ ಓಲೆಯಲ್ಲಿ ನನ್ನ ಸವಿನೆನಪುಗಳನ್ನು
ಹಂಚಿಕೊಳ್ಳಲು ಅನುವು ಮಾಡಿಕೊಟ್ಟ ಕುವರಯಲ್ಲಪ್ಪನವರಿಗೆ
ವಂದನೆಯನ್ನು ಅರ್ಪಿಸುತ್ತಾ
ಈ ವೀರೇಶನ ನುಡಿನಮನಕ್ಕೆ
ಪೂರ್ಣವಿರಾಮ ಹಾಕುತ್ತಿದ್ದೇನೆ.

ಮಲಗಿರುವೆ ಏಕೆ ನೀ ಲಲನಾಮಣಿ!

೧.ಮಲಗಿರುವೆ ಏಕೆ ನೀ ಲಲನಾಮಣಿ!

ಮಲಗಿರುವೆ ಏಕೆ ನೀ ಲಲನಾಮಣಿ!
ಎನ್ನೊಳು ಕೋಪವೇ ನಿನಗೆ
ಎನ್ನೊಳು ಕೋಪವೇ ನಿನಗೆ
ಕೈಕಾ,.....ರಮಣೀ.......ರಮಣೀ.......!
ಪರಿಹಾಸವೇ! ಆಯಾಸವೇ
ಪರಿಹಾಸವೇ! ಆಯಾಸವೇ
ಭಾಮಾಮಣಿ,...ಭಾಮಾಮಣಿ
ಪ್ರಿಯೆ ಮನದನ್ನೇ
ಪರಿಹಾಸವೇ,ಆಯಾಸವೇ

ವಚನವೇನೆ೦ಬುದ ಪೇಳ್ ಸತಿ ನೀ
ನಡೆಸಿಕೊಡುವೆನು
ನಡೆಸಿಕೊಡುವೆನೂ
ರಾಮನಾಣೆ.....
ಶ್ರೀ ರಾಮನಾಣೆ!